Wednesday, September 24, 2014

ವರಮಹಾಲಕ್ಷ್ಮಿ ಸ್ಪೆಶಲ್!!!

ಹರ್ಷಿಕಾ ಅವರು ನಾಯಕಿಯಗಳು ಸಾಕಷ್ಟು ಪ್ರಯತ್ನ ಮಾಡಲು ಆರಂಭಿಸಿದರು. ಆದರೆ ಮನೆಯವರೆಲ್ಲಾ ಸೇರಿ ಸಂತೋಷ್ ಅವರನ್ನು ನಾಯಕನಾಗಿ ನೇಮಿಸಿದರು.ಹರ್ಷಿಕಾ ಅವರು ನಾಯಕಿಯಗಳು ಸಾಕಷ್ಟು ಪ್ರಯತ್ನ ಮಾಡಲು ಆರಂಭಿಸಿದರು. ಆದರೆ ಮನೆಯವರೆಲ್ಲಾ ಸೇರಿ ಸಂತೋಷ್ ಅವರನ್ನು ನಾಯಕನಾಗಿ ನೇಮಿಸಿದರು. ತಮ್ಮನ್ನು ಕಡೆಗಣಿಸದೆ ಮಾತನಾಡಿಸುವಂತೆ ಹರ್ಷಿಕಾ ಸೃಜನ್ ಬಳಿ ರಾಜಿಯಾದರು. ಲಗ್ಷುರೀ ಬಜೆಟ್ ಅನ್ನು ಗಳಿಸಲು ಬೆಲೂನ್ ಗಳನ್ನು ಹೊಡೆಯ ಬೇಕಾದ ಸಂದರ್ಭದಲಿ ಎಲ್ಲರೂ ನಕ್ಕು ಆನಂದಿಸಿದರು.


ಸೀಕ್ರೆಟ್ ರೂಂನಲ್ಲಿದ ನೀತು ಅವರಿಗೆ ಮತ್ತೆ ಗೃಹಪ್ರವೇಶ ಮಾಡುವ ಸಮಯ ಬಂದಿತು. ಮೊದಲು ಕೇವಲ ತಮ್ಮ ಧ್ವನಿಯಿಂದ ಎಲ್ಲರನ್ನೂ ಅಶ್ಚರ್ಯಗೊಳಿಸಿ ನಂತರ ಒಳಗೆ ಹೋಗಿ ಎಲ್ಲರಿಗೆ ಪ್ರೀತಿಯ ಅಪ್ಪುಗೆ ನೀಡಿದರು.

ತಾವು ಸೀಕ್ರೆಟ್ ರೂಮ್ ನಲ್ಲಿ ಇದ್ದಿದಾಗಿ ಹಾಗೂ ಎಲಿಮಿನೇಟ್ ಆಗಿಲ್ಲವೆಂದು ಹೇಳಿದಾಗ ಉಳಿದವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ವರ ಮಹಾಲಕ್ಷ್ಮಿಯ ಹಬ್ಬದ ಪ್ರಯುಕ್ತ ಎಲ್ಲರೂ ಹೊಸ ಉಡುಪಗಳನ್ನುಧರಿಸಿ ಲಕ್ಷ್ಮಿ ಪೂಜೆಗೆ ಅಣಿಗೊಳಿಸಿದರು.

ಕಿಚ್ಚಿನ ಕಥೆ ಕಿಚ್ಚನ ಜೊತೆಯಲ್ಲಿ ರೋಹಿತ್ ಅವರನ್ನು ಎಂದಿನಂತೆ ಸುದೀಪ್ ಅವರು ನಾಮಿನೇಶನ್ ವಿಷಯದ ಮೇಲೆ ಹಾಸ್ಯ ಚಟಾಕಿ ಹಾರಿಸಿ ಕಾರ್ಯಕ್ರಮ ಶುರು ಮಾಡಿದರು.ಈ ವಾರದ ಎಲಿಮಿನೇಶನ್ ಕೊಡಲಿಗೆ ಬಲಿಯಾಗಿದ್ದು ಮಯೂರ್ ಪಟೇಲ್.

ಸಕ್ಕತ್ ಸನ್‌ಡೇ ವಿತ್ ಸುದೀಪನ ವೇದಿಕೆಯಲ್ಲಿ ಕಲಾಸಾಮ್ರಾಟ್ ಎಸ್. ನಾರಾಯಣ್ ರ ಇರುವಿಕೆ ಕಾರ್ಯಕ್ರಮ್ಮಕ್ಕೆ ಹೊಸ ಹುರುಪನ್ನು ನೀಡಿತು. ಚೈತ್ರದ ಪ್ರೇಮಾಂಜಲಿ ಚಿತ್ರದ ಬಗ್ಗೆ ಮಾತನಾಡಬೇಕಾದರೆ, ನಾರಾಯಣ್ ಅವರು ತಮ್ಮ ಮೊದಲನೇ ಚಿತ್ರದ ಅಧ್ಬುತ ಗೀತೆ ರಚನೆ  ಆದುದರ ಬಗ್ಗೆ ವಿವರಿಸಿದರು.
ತಮ್ಮ ಜೀವನ ನಡೆದುಕೊಂಡ ಬಗ್ಗೆ ವಿವರಿಸಿದ ಕ್ಷಣ ಎಲ್ಲರಲ್ಲೂ ಒಂದು ಸಾಧನೆ ಮಾಡುವ ಛಲ ಮೂಡಿತು ಎಂದರೆ ತಪ್ಪಾಗುವುದಿಲ್ಲಾ.ಮಯೂರ್ ಅವರನ್ನು ಪುನಃ ವೇದಿಕೆಗೆ ಬರ ಮಾಡಿಕೊಂಡ ನಂತರ ತಮ್ಮ ಲವ ಲವಿಕೆಯಿಂದ ಕೂಡಿದ ಪಂಚ್ - ಕಜ್ಜಾಯ ತುಂಬಾ ಜನರ ನಗುವಿಗೆ ಕಾರಣವಾಯಿತು.

ಮಯೂರ್ ಒಬ್ಬ ಪರಿಪೂರ್ಣ ನೃತ್ಯ ಕಲಾವಿದ ಎಂದು ವೇದಿಕೆ ಮೇಲೆ ನಿರೂಪಿಸಿದರು. ಎಲ್ಲರನ್ನೂ ಕ್ಷಮಿಸಿ, ಎಲ್ಲವನ್ನೂ ಮರೆತು ಕೇವಲ ಹರುಷದ ಕ್ಷಣಗಳನ್ನು ತಾವು ತೆಗೆದುಕೊಂಡು ಹೋಗುವುದಾಗಿ ಮಯೂರ್ ಪಟೇಲ್ ಹೇಳಿದಾಗ ಅವರನ್ನು ಅಪ್ಪುಗೆಯ ಮೂಲಕ ಬೀಳ್ಕೊಟ್ಟಿದ್ದು ನಮ್ಮ ನಿಮ್ಮ ಪ್ರೀತಿಯ ಕಿಚ್ಚ ಸುದೀಪ.

ಮತ್ತೆ ಬಂದ ಹರ್ಷಿಕಾ!!!

ಹರ್ಷಿಕಾ ಅವರ ಆಗಮನ ಮನೆಯಲ್ಲಿ ಒಂದು ಸಣ್ಣ ಕೋಲಾಹಲಕ್ಕೆ ನಾಂದಿ ಮಾಡಿತು. ಬಂದ ತಕ್ಷಣವೇ ಅವರಿಗೆ ಬಿಗ್ ಬಾಸ್, ನೇರವಾಗಿ ೪ ಜನರನ್ನು ನಾಮಿನೇಟ್ ಮಾಡಲು ಸೂಚಿಸಿದರು. ಅದರಂತೆ, ಹರ್ಷಿಕಾ ಅವರು ಸೃಜನ್, ಮಯೂರ್, ಶ್ವೇತಾ ಮತ್ತು ಅನುಪಮಾ ಅವರನ್ನು ನಾಮಿನೇಟ್ ಮಾಡಿದರು.

ಹರ್ಷಿಕಾ ಅವರ ಕಡೆಯಿಂದ ಬಂದ ಉತ್ತರಗಳು ಮನೆಯಲ್ಲಿ ಸಣ್ಣ ಅತೃಪ್ತ ಅಲೆಯನ್ನು ಸೃಷ್ಟಿಸಿತು. ಈ ಮಧ್ಯೆ ಗುರು ಅವರು ತಮ್ಮ ತಾಳ್ಮೆ ಕಳೆದುಕೊಂಡು ಬಿಗ್ ಬಾಸ್ ಮನೆಯಿಂದ ಹೊರ ಜಿಗಿಯಲು ವಿಫಲ ಯತ್ನ ನಡೆಸಿದರು. ಈ ಸಮಯದಲ್ಲಿ ಗುರು ಅವರನ್ನು ತಡೆಯುವ ಯತ್ನ ಮಾಡಿದ್ದು ಅಕುಲ್, ಆದಿ ಮತ್ತು ಸಂತೋಷ್.
ಇದೆಲ್ಲಾ ಡ್ರಾಮ ಮುಗಿದ ನಂತರ, ಡ್ಯಾನ್ಸ್ ಹೇಳಿಕೊಡುವಂತೆ ಗುರು ಅಕುಲ್ ಅವರನ್ನು ಕೇಳಿಕೊಂಡು ಕೆಲವು ಹೆಜ್ಜೆ ಹಾಕಿದರು. ಇದಕ್ಕೆ ಸಾಥ್ ನೀಡಿದ್ದು ನಿಂಬೆ ಹಣ್ಣಿನ ಹುಡ್ಗಿ ಹರ್ಷಿಕಾ..

ತದನಂತರ ಧಮ್ ಟಾಸ್ಕ್ ಶುರುವಾಯಿತು. ಟೀಮ್ A ಹರ್ಷಿಕಾ, ದೀಪಿಕಾ, ಅಕುಲ್, ಸಂತೋಷ್ ಮತ್ತು ಆದಿ ಅವರನ್ನು ಒಳಗೊಂಡರೆ ಉಳಿದವರು ಟೀಮ್ B ಸ್ಪರ್ಧಿಗಳಾಗಿದ್ದರು. 

ಅಂಕಗಳಿಗಾಗಿ ನಡೆದ ಟಾಸ್ಕ್ ತುಂಬಾ ಘರ್ಷಣೆಗಳಿಗೆ ಮೌನ ಸಾಕ್ಷಿಯಾಯಿತು. ಟಾಸ್ಕ್ ನೀಡುವ ವೇಳೆ ಅಕುಲ್ ಮತ್ತು ಸೃಜನ್ ಮಾತುಕತೆ ತಾರಕಕ್ಕೆ ಏರಿದರೆ, ಗುರು ಅವರು ತಮ್ಮ ಕೇಶವನ್ನು ತೆಗಿಸಿದರೆ ಎಂದು ಅಕುಲ್ ಹೇಳಿದಾಗ ಎಲ್ಲರಲ್ಲೂ ಎಲ್ಲೋ ಒಂದು ಕಡೆ ದುಗುಡ ವ್ಯಕ್ತವಾಯಿತು. 

ಗುರು ಅವರನ್ನು ಅದರಿಂದ ಪಾರು ಮಾಡಿದ್ದು, ಸೃಜನ್. ಅವರು ಸ್ವಯಂ ಪ್ರೇರಿತರಾಗಿ ಗುರುಗಳ ಹತ್ತಿರ ಮನವಿ ಮಾಡಿಕೊಂಡು ತಮ್ಮ ಕೇಶವನ್ನು ಕ್ಷೌರ ಮಾಡಿಸಿಕೊಂಡು ಮಾನವೀಯತೆ ಮೆರೆದರು. 

ಮೂವತ್ತು ಅಂಕಗಳಿಗೆ ತಮ್ಮ ಕೂದಲು ಕೊಟ್ಟಿದಕ್ಕೆ ಗುರು ಸೃಜನ್ ಅವರನ್ನು ವ್ಯಂಗ್ಯ ಮಾಡಿದಕ್ಕೆ ಮುಂದೆ ಮನೆಯಲ್ಲಿ ಒಂದು ಚಿಕ್ಕ ನಾಟಕ ನೋಡಬೇಕಾಯಿತು. ಅಕುಲ್ ಎಂದಿನಂತೆ ಟಾಸ್ಕ್ ನಲ್ಲಿ ಎದುರಾಳಿಗಳನ್ನು ಕಿಚ್ಚಯಿಸುತ್ತಾ ಅವರ ತಾಕತ್ತನ್ನು ಪ್ರದರ್ಶಿಸಲು ಉತ್ತೇಜುಸುತ್ತಿದರು. 

ಈಜು ಕೊಳದ ಪಕ್ಕ ನಡೆಯುವ ಸವಾಲನ್ನು ಸಮರ್ಥವಾಗಿ ಎದುರಿಸಿದ ಶ್ವೇತಾ ತಮ್ಮ ತಂಡಕ್ಕೆ ಒಳ್ಳೆಯ ಸಾಥ್ ನೀಡಿದರು.ಈ ಮಧ್ಯೆ ತಮ್ಮ ತಾಳ್ಮೆ ಕಳೆದುಕೊಂಡು ಅಕುಲ್ ವಾಗ್ವಾದ ಶುರುಮಾಡಿದಾಗ, ಬಹಳ ತಾಳ್ಮೆಯಿಂದ ಗುರು ಅಕುಲ್ ಅವರನ್ನು ಛೇಡಿಸುತ್ತಿದ್ದರು. ಈ ಟಾಸ್ಕ್ ಮನೆಯೊಳಗಿನ ಪ್ರಥಮ ಮಹಿಳಾ ಕಲಹಕ್ಕೂ ನಾಂದಿ ಹಾಡಿತು. ಶ್ವೇತಾ ಮತ್ತು ಹರ್ಷಿತಾ ನಡುವಿನ  ವಾಗ್ವಾದ ಬೇರೆಯವರನ್ನು ಬೆರಗುಗೊಳಿಸಿತು.  

ಸೃಜನ್ ತಂಡ ನೀಡಿದ ಟಾಸ್ಕ್ ಗಳನ್ನು ಅಕುಲ್ ಮುನ್ನಡೆಸಿದ ತಂಡ ಪರಿಪೂರ್ಣಿಸದೆ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.ಹರ್ಷಿಕಾ ನಾಯಕಿಯಾಗಲು ತಮ್ಮ ಯೋಜನೆಗಳನ್ನು ಶುರು ಮಾಡಿದರು.ಆರಂಭದಲ್ಲಿ ಗುರು ಅವರಿಗೆ ಅನುಮಾನವಿದ್ದರೂ, ಕೊನೆಗೆ ಉಳಿದವರು ಮಾಡಿದ ಅತ್ಯುತ್ತಮ್ಮ ನಟನೆಗೆ ಬಲಿಪಶುವಾದರು.