Wednesday, September 24, 2014

ವರಮಹಾಲಕ್ಷ್ಮಿ ಸ್ಪೆಶಲ್!!!

ಹರ್ಷಿಕಾ ಅವರು ನಾಯಕಿಯಗಳು ಸಾಕಷ್ಟು ಪ್ರಯತ್ನ ಮಾಡಲು ಆರಂಭಿಸಿದರು. ಆದರೆ ಮನೆಯವರೆಲ್ಲಾ ಸೇರಿ ಸಂತೋಷ್ ಅವರನ್ನು ನಾಯಕನಾಗಿ ನೇಮಿಸಿದರು.ಹರ್ಷಿಕಾ ಅವರು ನಾಯಕಿಯಗಳು ಸಾಕಷ್ಟು ಪ್ರಯತ್ನ ಮಾಡಲು ಆರಂಭಿಸಿದರು. ಆದರೆ ಮನೆಯವರೆಲ್ಲಾ ಸೇರಿ ಸಂತೋಷ್ ಅವರನ್ನು ನಾಯಕನಾಗಿ ನೇಮಿಸಿದರು. ತಮ್ಮನ್ನು ಕಡೆಗಣಿಸದೆ ಮಾತನಾಡಿಸುವಂತೆ ಹರ್ಷಿಕಾ ಸೃಜನ್ ಬಳಿ ರಾಜಿಯಾದರು. ಲಗ್ಷುರೀ ಬಜೆಟ್ ಅನ್ನು ಗಳಿಸಲು ಬೆಲೂನ್ ಗಳನ್ನು ಹೊಡೆಯ ಬೇಕಾದ ಸಂದರ್ಭದಲಿ ಎಲ್ಲರೂ ನಕ್ಕು ಆನಂದಿಸಿದರು.


ಸೀಕ್ರೆಟ್ ರೂಂನಲ್ಲಿದ ನೀತು ಅವರಿಗೆ ಮತ್ತೆ ಗೃಹಪ್ರವೇಶ ಮಾಡುವ ಸಮಯ ಬಂದಿತು. ಮೊದಲು ಕೇವಲ ತಮ್ಮ ಧ್ವನಿಯಿಂದ ಎಲ್ಲರನ್ನೂ ಅಶ್ಚರ್ಯಗೊಳಿಸಿ ನಂತರ ಒಳಗೆ ಹೋಗಿ ಎಲ್ಲರಿಗೆ ಪ್ರೀತಿಯ ಅಪ್ಪುಗೆ ನೀಡಿದರು.

ತಾವು ಸೀಕ್ರೆಟ್ ರೂಮ್ ನಲ್ಲಿ ಇದ್ದಿದಾಗಿ ಹಾಗೂ ಎಲಿಮಿನೇಟ್ ಆಗಿಲ್ಲವೆಂದು ಹೇಳಿದಾಗ ಉಳಿದವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ವರ ಮಹಾಲಕ್ಷ್ಮಿಯ ಹಬ್ಬದ ಪ್ರಯುಕ್ತ ಎಲ್ಲರೂ ಹೊಸ ಉಡುಪಗಳನ್ನುಧರಿಸಿ ಲಕ್ಷ್ಮಿ ಪೂಜೆಗೆ ಅಣಿಗೊಳಿಸಿದರು.

ಕಿಚ್ಚಿನ ಕಥೆ ಕಿಚ್ಚನ ಜೊತೆಯಲ್ಲಿ ರೋಹಿತ್ ಅವರನ್ನು ಎಂದಿನಂತೆ ಸುದೀಪ್ ಅವರು ನಾಮಿನೇಶನ್ ವಿಷಯದ ಮೇಲೆ ಹಾಸ್ಯ ಚಟಾಕಿ ಹಾರಿಸಿ ಕಾರ್ಯಕ್ರಮ ಶುರು ಮಾಡಿದರು.ಈ ವಾರದ ಎಲಿಮಿನೇಶನ್ ಕೊಡಲಿಗೆ ಬಲಿಯಾಗಿದ್ದು ಮಯೂರ್ ಪಟೇಲ್.

ಸಕ್ಕತ್ ಸನ್‌ಡೇ ವಿತ್ ಸುದೀಪನ ವೇದಿಕೆಯಲ್ಲಿ ಕಲಾಸಾಮ್ರಾಟ್ ಎಸ್. ನಾರಾಯಣ್ ರ ಇರುವಿಕೆ ಕಾರ್ಯಕ್ರಮ್ಮಕ್ಕೆ ಹೊಸ ಹುರುಪನ್ನು ನೀಡಿತು. ಚೈತ್ರದ ಪ್ರೇಮಾಂಜಲಿ ಚಿತ್ರದ ಬಗ್ಗೆ ಮಾತನಾಡಬೇಕಾದರೆ, ನಾರಾಯಣ್ ಅವರು ತಮ್ಮ ಮೊದಲನೇ ಚಿತ್ರದ ಅಧ್ಬುತ ಗೀತೆ ರಚನೆ  ಆದುದರ ಬಗ್ಗೆ ವಿವರಿಸಿದರು.
ತಮ್ಮ ಜೀವನ ನಡೆದುಕೊಂಡ ಬಗ್ಗೆ ವಿವರಿಸಿದ ಕ್ಷಣ ಎಲ್ಲರಲ್ಲೂ ಒಂದು ಸಾಧನೆ ಮಾಡುವ ಛಲ ಮೂಡಿತು ಎಂದರೆ ತಪ್ಪಾಗುವುದಿಲ್ಲಾ.ಮಯೂರ್ ಅವರನ್ನು ಪುನಃ ವೇದಿಕೆಗೆ ಬರ ಮಾಡಿಕೊಂಡ ನಂತರ ತಮ್ಮ ಲವ ಲವಿಕೆಯಿಂದ ಕೂಡಿದ ಪಂಚ್ - ಕಜ್ಜಾಯ ತುಂಬಾ ಜನರ ನಗುವಿಗೆ ಕಾರಣವಾಯಿತು.

ಮಯೂರ್ ಒಬ್ಬ ಪರಿಪೂರ್ಣ ನೃತ್ಯ ಕಲಾವಿದ ಎಂದು ವೇದಿಕೆ ಮೇಲೆ ನಿರೂಪಿಸಿದರು. ಎಲ್ಲರನ್ನೂ ಕ್ಷಮಿಸಿ, ಎಲ್ಲವನ್ನೂ ಮರೆತು ಕೇವಲ ಹರುಷದ ಕ್ಷಣಗಳನ್ನು ತಾವು ತೆಗೆದುಕೊಂಡು ಹೋಗುವುದಾಗಿ ಮಯೂರ್ ಪಟೇಲ್ ಹೇಳಿದಾಗ ಅವರನ್ನು ಅಪ್ಪುಗೆಯ ಮೂಲಕ ಬೀಳ್ಕೊಟ್ಟಿದ್ದು ನಮ್ಮ ನಿಮ್ಮ ಪ್ರೀತಿಯ ಕಿಚ್ಚ ಸುದೀಪ.

No comments:

Post a Comment